dasara padagalu · MADHWA · Raghutthama theertharu

Nodide Gurugala nodide(Raghuttama theertharu)

ನೋಡಿದೆ ಗುರುಗಳ ನೋಡಿದೆ ||Pa||

ನೋಡಿದೆನು ಗುರುಗಳ ಪಾದಾಬ್ಜವ
ಪಾಡಿದೆನು ಸನ್ಮಹಿಮೆಗಳ ನಾ
ಬೇಡಿದೆನು ಮನದಣಿಯೆ ವರಗಳ
ಈಡು ಇಲ್ಲದೆ ಕೊಡುವ ಪ್ರಭುಗಳ ||a.pa||

ಪಂಚಕೃಷ್ಣಾರಣ್ಯಕ್ಷೇತ್ರ ಪಿನಾಕಿಯ ತೀರದಲ್ಲಿ ನಿಂತು
ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು
ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ
ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ ||1||

ಅಲವಬೋಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ
ಕಲುಷಮತಗಿರಿ ಸಮುದ(ದಾ)ಯಂಗಳ ಕುಲಿಶದಂದಲಿ ಖಂಡಿಸುತಲಿ
ಮೂಲರಾಮ ದಿಗ್ವಿಜಯರಾಮರ ಪಾದಕಮಲಕೆ ಭೃಂಗನೆನಿಸುತ
ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುತ ಯತಿಮೌಳಿ ರತುನರ ||2||

ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವ
ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ
ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆನಿಸಿ ಮರೆವರ
ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ||3||


Nodide gurugala nodide ||pa||

Nodidenu gurugala padabjava
Padidenu sanmahimegala na
Bedidenu manadaniye varagala
Idu illade koduva prabugala|| a.pa.||

Panchakrushnaranyakshetra pinakiya tiradalli nintu
Mincutiha kashayadanda kamandalava dharisutta dhareyolu
Pancabanada pitana gunagala anceyadi pogalutta harushadi
Sanchitagamigala kaledu prapancadali merevantha gurugala ||1||

Alavabodhara bashyatika bavavanu sujanarige bodhisi
Kalushamatagiri samuda(da)yangala kulisadandali kandisutali
Mularama digvijayaramara padakamalake brunganenisuta
Silabakti viraktimatigala palisuta yatimauli ratunara ||2||

Kamadhenu sukalpataru chintamaniyavol kamitarthava
Premadali birutta adhyatmadi tapatraya kaleyuva
Svami srihari sridavithalana dasagraniyenisi marevara
Nemadindali sri raguttama maunivaryara karuna bayasuta 3

dasara padagalu · MADHWA · Raghutthama theertharu

Gururaja Raghuttama Gururaja

ಗುರುರಾಜ ರಘೂತ್ತಮ ಗುರುರಾಜ
ಗುರುರಾಜ ನಮೋ ನಮೋ ನಿನ್ನ ಪಾದ
ಸರಸಿಜಯುಗಳದಿ ನಾ ಶರಣು ಅಹ
ಧರಣಿಜಾಪತಿ ರಾಮ ಭದ್ರಗೆ ಪ್ರಿಯ ನೀನು
ಕರುಣದಿ ಸಲಹೆನ್ನ ದುರಿತಗಳಳಿದು ||ಪ||

ನಿವ್ರ್ಯಾಜ ಕರುಣಿ ರಘುವರ್ಯ ಗುರು
ವರ್ಯ ಸುಮೇಧರ ದಿವ್ಯ ಚಾರು
ತೋಯಜ ಕರದಿಂದ ಉದಯನಾಗಿ
ನಿಗಮ ಸಾಮ್ರಾಜ್ಯ ಅಹ
ಮಾಯೇಶ ಕಾಳೀಶ ಗುರುಗಳ ಪ್ರಿಯ ಬಾಲ
ವಯಸ್ಸಲ್ಲೇ ಉದ್ದಾಮ ಪಂಡಿತನಾದಿಯೋ ||1||

ಬದರೀಶ ನಿರ್ಣೀತತತ್ವ ಅರ್ಥ
ವಿಸ್ತಾರ ಮಾಡಿದ ಮಧ್ವ ಟೀಕೆ
ಜಯತೀರ್ಥ ಬರೆದ ತದ್ಭಾವ ಪೇಳಿ
ಒದಗಿಸಿದೆಯೊ ಸುಖವ ಅಹ
ಮುದ ಸೌಭಾಗ್ಯ ಸಾಧು ವೈಷ್ಣವತನ
ಇತ್ತು ಪಾಲಿಪುದೆನ್ನ ಕುಂದುಗಳೆಣಿಸದೆ ||2||

ಧರೆಯಲ್ಲಿ ದಕ್ಷಿಣಕಾಶಿ ಸ್ವರ್ಗ
ಧರೆಯಳದವನ ಸೇವಿಸಿ ಗಂಗಾ
ಧರಷಡಾನನ ಇಲ್ಲಿ ವಾಸಿಸುವ ಈ
ಕ್ಷೇತ್ರ ವೃಂದಾವನ ವಾಸಿ ಅಹ
ಪರಮೇಶ ಕೇಶವ ಪ್ರಿಯಾ ಪಿನಾಕಿನಿಯಿಂದ್ರಾ
ತೀರ ಮಧ್ಯದಿ ತಪಗೈದು ಭಕ್ತರ ಕಾಯ್ವಿ ||3||

ಸುರವೃಂದ ಶ್ರೇಷ್ಠ ನೀನಹುದು ಎನ್ನ
ಪರಿ ಬಾಧೆಯ ತರಿದು ಸರ್ವ
ಸಿರಿ ಇತ್ತು ಹರಿ
ಗುರು ಭಕ್ತಿ ಬೆಳೆಸಿ ಪಾಲಿಪುದು ಅಹ
ಹರ ಸಮೀಪಕೆ ಒಳ್ಳೆ ಸಾಧನ ಸರ್ವದಾ
ಕಾರುಣ್ಯದಲಿ ಎನ್ನೊಳ್ ನಿಂತು ಮಾಡಿಸೋ ಗುರೋ ||4||

ರಾಮನೃಕೇಸರಿ ವ್ಯಾಸ ಸತ್ಯ
ಭಾಮ ರುಕ್ಮೀಣಿ ದೇವಿ ಅರಸ ಭೂಮ
ಶ್ರೀಮಂತ ಕ್ಷೀರಾಬ್ಧಿವಾಸ ಮಧ್ವ
ಭೀಮಹನುಮ ವಂದ್ಯ ಶ್ರೀಶ ಅಹ
ಹೇಮಗರ್ಭನ ತಾತ `ಪ್ರಸನ್ನ ಶ್ರೀನಿವಾಸ’
ರಮೆಯರಸನ ಪ್ರಿಯತಮ ಜೀಯ ||5||


Gururaja raguttama gururaja
Gururaja namo namo ninna pada
Sarasijayugaladi na saranu aha
Dharanijapati rama Badrage priya ninu
Karunadi salahenna duritagalalidu ||pa||

Nivryaja karuni raguvarya guru
Varya sumedhara divya caru
Toyaja karadimda udayanagi
Nigama samrajya aha
Mayesa kalisa gurugala priya bala
Vayassalle uddama panditanadiyo ||1||

Badarisa nirnitatatva artha
Vistara madida madhva tike
Jayatirtha bareda tadbava peli
Odagisidey jaána sukava aha
Muda jaána saubagya sadhu vaishnavatana
Ittu palipudenna kundugalenisade||2||

Dhareyalli dakshinakasi svarga
Dhareyaladavana sevisi ganga
Dharashadanana illi vasisuva I
Kshetra vrundavana vasi aha
Paramesa kesava priya pinakiniyindra
Tira madhyadi tapagaidu Baktara kayvi ||3||

Suravrunda sreshtha ninahudu enna
Pari badheya taridu sarva
Siri ittu hari
Guru Bakti belesi palipudu aha
Hara samipake olle sadhana sarvada
Karunyadali ennol nimtu madiso guro ||4||

Ramanrukesari vyasa satya
Bama rukmini devi arasa buma
Srimamta kshirabdhivasa madhva
Bimahanuma vandya srisa aha
Hemagarbana tata prasanna srinivasa
Rameyarasana priyatama jiya ||5||

dasara padagalu · MADHWA · narayana varma · vyasarayaru

Narayana varma by Vyasarajaru

ಸರ್ವದೇಶದಲ್ಲೇ ಶ್ರೀಹರಿ ನಮ್ಮನ್ನು ರಕ್ಷಿಸೋ
ಜಲದಲ್ಲಿ ಮತ್ಸ್ಯಾವತಾರನಾಗಿ
ಸ್ಥಳದಲ್ಲಿ ವಾಮನನಾಗಿ ರಕ್ಷಿಸೋ ನಿನ್ನ ಭಕ್ತರನ್ನು
ಆಕಾಶದಲ್ಲಿ ತ್ರಿವಿಕ್ರಮನಾಗಿ ರಕ್ಷಿಸೋ।।

ಭಯಗಳಲ್ಲಿ ನಾರಸಿಂಹನಾಗಿ
ಮಾರ್ಗದಲ್ಲಿ ವರಾಹನಾಗಿ ರಕ್ಷಿಸೋ ನಿನ್ನ ಭಕ್ತರನ್ನು
ಪರ್ವತಾಗ್ರದಲ್ಲಿ ಪರಶುರಾಮನಾಗಿ ರಕ್ಷಿಸೋ
ವನವಾಸದಲ್ಲಿ ರಾಮಚಂದ್ರನಾಗಿ ।।

ಕರ್ಮಬಂಧಂಗಳ ಕಳೆದು ರಕ್ಷಿಸೋ ನಮ್ಮ ಕಪಿಲಮೂರ್ತಿ
ಕಾವೇಶದಲ್ಲಿ ಸನತ್ಕುಮರನಾಗಿ ರಕ್ಷಿಸೋ
ದುರ್ಮಾರ್ಗದಲ್ಲಿ ಹಯಗ್ರೀವನಾಗಿ
ಅನ್ಯದೇವತೆ ಪೂಜಾ ಅಲ್ಲೇ ರಕ್ಷಿಸೋ ನಮ್ಮ ಮಹಿದಾಸ ।।

ಪಾಷಂಡಮತದಲ್ಲಿ ಬೌದ್ಧನಾಗಿ ರಕ್ಷಿಸೋ
ಅನ್ಯ ದೂತಣಿ ಅವತರಿಸಿ ನಮ್ಮ ದುಂದುಭಿಯಾದಿಂದಲಿ ರಕ್ಷಿಸೋ
ನಮ್ಮ ಶ್ರೀವಿಶ್ವಮೂರ್ತಿ ನರಕಗಳಿಂದಲಿ ಕೂರ್ಮನಾಗಿ ರಕ್ಷಿಸೋ
ಆಪತ್ತುಗಳಿಗೆ ಧನ್ವಂತ್ರಿಯಾಗಿ ಕಲಿಯುಗ ಕಲ್ಮಶ ರಕ್ಷಿಸೋ ।।

ನಮ್ಮ ಕಲ್ಕಿ ಮೂರ್ತಿ
ಪ್ರಾತಃಕಾಲದಲ್ಲಿ ಕೇಶವ ನಮ್ಮನ್ನು ರಕ್ಷಿಸೋ
ಸಂಧ್ಯಾಕಾಲದಲ್ಲಿ ವಿಷ್ಣು ನಮ್ಮ ರಕ್ಷಿಸೋ
ಸಂಗಮದಲಿ ಗೋವಿಂದನಾಗಿ ಸಾಯಂಕಾಲದಲ್ಲಿ ರಕ್ಷಿಸೋ ।।

ನಮ್ಮ ಶ್ರೀಧರನಾಗಿ ಪೂರ್ವಕಾಲದಲ್ಲಿ ಹೃಷೀಕೇಶ ನಮ್ಮನ್ನು ರಕ್ಷಿಸೋ
ನಿಶಾಕಾಲದಲ್ಲಿ ಪದ್ಮನಾಭನಾಗಿ ಅಪರಾತ್ರಿ ಕಾಲದಲ್ಲಿ ರಕ್ಷಿಸೋ
ನಮ್ಮ ಶ್ರೀ ವಿಶ್ವಮೂರ್ತಿ ಉಷಃಕಾಲದಲ್ಲಿ ಜನಾರ್ಧನನಾಗಿ ರಕ್ಷಿಸೋ ।।

ಸಕಲ ಕಾಲವು ಸಂಧಿಸಿ ಶ್ರೀ ಹರಿ ನಿಮ್ಮ ಚಕ್ರವು
ಅತಿ ಶಾಲಪ್ರಭೆಯಂತೆ ಪ್ರಳಯಕಾಲದ ಅಗ್ನಿಯಂತೆ
ಈ ಮೂರು ಷಡವೈದು ಸೈನ್ಯಗಳ ಅಗ್ನಿವಾಯು ಒಡಗೂಡಿ ತೃಣವ
ಸುಡುವಂತೆ ಭೂತಗಂಧರ್ವರ ಪೂಷಾಂಡವ ಕೆಡಿಸಿ
ನಮ್ಮ ಸಲಹದೆನುತ ವಿಷ್ಣು ಶಂಖವೇ ನಿಮ್ಮ ಧ್ವನಿ ಕೇಳಿ
ರಾಕ್ಷಸರು ಭಯಬಿಡಿಸಿ ಎದೆಯೊಡೆಸಿ ಲಯವನ್ನು ಮಾಡಿ
ವಿಷ್ಣು ಗಜೇಂದ್ರ ರಾಕ್ಷಸರ ಕಡೆದು ಚೂರ್ಣವ ಮಾಡಿ
ಕಿವಿಗಳ೦ತುದುರಿಸಿ ಭೂಮಿಯಲ್ಲೇ ಅವತರಿಸಿ
ವೈಷ್ಣವ ಸುಜನರನು ಸಲಹೆಂದು ನಿಮ್ಮ ಪ್ರಾರ್ಥನೆಯ ನಾ ಮಾಡಿದೆ
ಸಾಮವೇದಕೆ ಭೀಮನಾದ ಗರುಡಗೆ ಸಲಹುವನು
ನಮ್ಮ ಪ್ರಾಣಾ೦ಗ ಭೂಮಿ ದಿಕ್ಕು ದಿಕ್ಕಿಗೆ ನಾರಸಿಂಹ ಮೂರುತಿಯಾಗಿ
ತಾ ಒಳ ಹೊರಗೆ ವ್ಯಾಪಕನಾಗಿ
ಶ್ರೀಹರಿ ಇದ್ದು ರಕ್ಷಿಸಲಿ ಘೋರ ದುರಿತಗಳೆಲ್ಲ
ಓಡುತಿರಲಿ ಅಂದಾಪರಿಯಲಿ ಸರ್ವವ್ಯಾಪಕನಾಗಿ ರಕ್ಷಿಸೋ
ಎಲ್ಲಾ ಪರಿಯಿಂದ ಭಕ್ತರನ್ನು ನೆನೆಯೆ ಮಧ್ವಗುರು ಅಂತರ್ಯಾಮಿ
ನಮ್ಮ ಶ್ರೀಮದಾನಂದತೀರ್ಥರನು ಸುವ್ವಿ ಸರ್ವೋತ್ತಮನೆ
ಸುವ್ವಿ ವಿಶ್ವರೂಪನೆ ಸುವ್ವಿ ನಮ್ಮ ಶ್ರೀಮದನಂತಾವತಾರಗಳಿಗೆ
ಸುವ್ವಿ ಎಂದು ಪಾಡಿ ಸುಖಿಯಾದ ಜಮದಗ್ನಿ ವತ್ಸಲ ಭೃಗುರಾಮ
ಭೂಮಿ ಜಲದಲ ಜಯ ಶ್ರೀರಾಮ ಜಾನಕಿ ವಲ್ಲಭ
ದಶರಥ ರಾಮ ರಾಮ ನಾಮಕ್ಕಿಂತ ಇನ್ನ್ಯಾವುದೂ ಸರಿಯಿಲ್ಲವೆಂದು
ಮೊರೆ ಹೊಕ್ಕೆನು ಶ್ರೀಹರಿಯೇ ಮುಕ್ತಿ ಬಲವಂತ
ಮುಕ್ತಿ ಗೋವಿಂದ ಕಾಮಧೇನು ಕಲ್ಪತರು ಗೋವಿಂದ
ನಾಮೋಚ್ಚರಣ ಪರಮಾತ್ಮ ಗೋವಿಂದ ಸ್ಮೃತಿತತಿಗಳ ಕೊಂಡಾಡುವೆ
ಹರೇ ನಾರಾಯಣ ಪುರಾಣ ಪುರುಷೋತ್ತಮ
ಆದಿನಾರಾಯಣ ಮಂತ್ರವೊಂದೇ ಅಂಬರೀಷನ ಮರಿಕಾಯ್ದಿತ್ತು
ಈ ಮಂತ್ರ ತುಂಬುರು ನಾರದರಿಗೆ ಶ್ರೀ ಕೃಷ್ಣಮಂತ್ರ
ಶಂಭು ನಾರಿಪಿತನ ಸಲಹಿತು


Sarvadesadalle srihari nammannu rakshiso
Jaladalli matsyavataranagi
Sthaladalli vamananagi rakshiso ninna Baktarannu
Akasadalli trivikramanagi rakshiso||

Bayagalalli narasimhanagi
Margadalli varahanagi rakshiso ninna Baktarannu
Parvatagradalli parasuramanagi rakshiso
Vanavasadalli ramachandranagi ||

Karmabandhangala kaledu rakshiso namma kapilamurti
Kavesadalli sanatkumaranagi rakshiso
Durmargadalli hayagrivanagi
Anyadevate puja alle rakshiso namma mahidasa ||

Pashandamatadalli bauddhanagi rakshiso
Anya dutani avatarisi namma dundubiyadindali rakshiso
Namma srivisvamurti narakagalindali kurmanagi rakshiso
Apattugalige dhanvantriyagi kaliyuga kalmasa rakshiso ||

Namma kalki murti
Pratahkaladalli kesava nammannu rakshiso
Sandhyakaladalli vishnu namma rakshiso
Sangamadali govindanagi sayankaladalli rakshiso ||

Namma sridharanagi purvakaladalli hrushikesa nammannu rakshiso
Nisakaladalli padmanabanagi aparatri kaladalli rakshiso
Namma sri visvamurti ushahkaladalli janardhananagi rakshiso ||

Sakala kalavu sandhisi sri hari nimma cakravu
Ati salaprabeyante pralayakalada agniyamte
I muru shadavaidu sainyagala agnivayu odagudi trunava
Suduvante butagandharvara pushandava kedisi
Namma salahadenuta vishnu sankave nimma dhvani keli
Rakshasaru bayabidisi edeyodesi layavannu madi
Vishnu gajendra rakshasara kadedu curnava madi
Kivigalantudurisi bumiyalle avatarisi
Vaishnava sujanaranu salahendu nimma prarthaneya na madide
Samavedake bimanada garudage salahuvanu
Namma prananga bumi dikku dikkige narasimha murutiyagi
Ta ola horage vyapakanagi
Srihari iddu rakshisali gora duritagalella
Odutirali andapariyali sarvavyapakanagi rakshiso
Ella pariyinda Baktarannu neneye madhvaguru antaryami
Namma srimadanandatirtharanu suvvi sarvottamane
Suvvi visvarupane suvvi namma srimadanantavataragalige
Suvvi endu padi sukiyada jamadagni vatsala brugurama
Bumi jaladala jaya srirama janaki vallaba
Dasaratha rama rama namakkinta innyavudu sariyillavemdu
More hokkenu srihariye mukti balavanta
Mukti govinda kamadhenu kalpataru govinda
Namoccarana paramatma govinda smrutitatigala kondaduve
Hare narayana purana purushottama
Adinarayana mantravonde ambarishana marikaydittu
I mantra tumburu naradarige sri krushnamantra
Sambu naripitana salahitu

dasara padagalu · MADHWA · Rudra · siva

Janapriya Dasara padagalu on Rudra devaru

ಚಂದ್ರಚೂಡ ಶಿವಶಂಕರ ಪಾರ್ವತಿರಮಣಾ ನಿನಗೆ ನಮೋ ನಮೋ || ಪ ||
ಸುಂದರ ಮೃಗಧರ ಪಿನಾಕಧನುಧರ ಗಂಗಾಶಿರ ಗಜಚರ್ಮಾಂಬರಧರ || ಅ.ಪ ||

ನಂದಿವಾಹನಾನಂದದಿಂದ ಮೂರ್ಜಗದಿ ಮೆರೆವವ ನೀನೆ
ಅಂದು ಅಮೃತಘಟದಿಂದುದಯಿಸಿದ ವಿಷತಂದು ಭುಜಿಸಿದವ ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀರಾಮನ ಪಾದವ ಚೆಂದದಿ ಪೊಗಳುವ ನೀನೆ || ೧ ||

ಬಾಲ ಮಾರ್ಕಂಡನ ಕಾಲನು ಎಳೆವಾಗ ಪಾಲಿಸಿದಾತನು ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ಗಿಗಂಬರ ನೀನೆ
ಕಾಲಕೂಟ ವಿಷವ ಮೆದ್ದ ಶೂಲಪಾಣಿಯು ನೀನೆ
ಜಾಲಮಾಡಿದ ಗೋಪಾಲನೆಂಬ ಪೆಣ್ಣಿಗೆ ಮರುಳಾದವ ನೀನೆ || ೨ ||

ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರದಿ ವಾಸನು ನೀನೆ
ಕೊರಳೊಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ
ಗರುಡಗಮನ ಶ್ರೀಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || ೩ ||

chandrachuda sivashankara


ಶಿವನೇ ನಾ ನಿನ್ನ ಸೇವಕನಯ್ಯಾ
ಕರುಣದಿ ಪಿಡಿ ಕೈಯ್ಯಾ ಶಿರಿಧರನರಮಯ್ಯ || ಪ ||
ಭವಮೋಚಕ ಭಾಗವತಶಾಸ್ತ್ರವನು
ಅವನೀಶಗೆ ಪೇಳ್ದವ ನೀನಲ್ಲವೆ || ಅ.ಪ ||

ವೈಕಾರಿಕ ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ
ಸಾಕಾರಿ ಶಾರ್ವರಿಧವಧರ ಸಾಂಬ ಸುರಪಾದ್ಯರ ಬಿಂಬ
ವೈಕಲ್ಯಾಸ್ಪದವ ಕಳೆದೊಮ್ಮಿಗೆ
ವೈಕುಂಠಕೆ ಕರೆದೊಯ್ಯೊ ಕರಿಗೊರಳಾ || ೧ ||

ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳಕಾವ
ಸ್ತುತ್ಯಾದ್ರಿಜ ದಿತಿಜತತೀವನದಾವಾ ದುರಿತಾಂಬುಧಿನಾವ
ಕೃತ್ತಿವಾಸ ಎನ್ನತ್ಯಪರಾಧಗ
ಳೆತ್ತಿಣಿಸದೆ ಕೃತಕೃತ್ಯನ ಮಾಡೈ || ೨ ||

ಗಂಗಾಧರ ಷಣ್ಮುಖಗಣಪರ ತಾತ ತ್ರೈಲೋಕ್ಯತ್ರಾತ
ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ
ತುಂಗಮಹಿಮ ನಿಸ್ಸಂಗ ಹರಿಯ ದ್ವಿತಿ
ಯಂಗ ಡಮರು ಶೂಲಂಗಳ ಪಿಡಿದಿಹ || ೩ ||

ಪಂಚಾನನ ಪನ್ನಗಭೂಷಣ ಭೀಮ ಭುವನಾಭಿರಾಮ
ಸಂಚಿಂತನಮಾಡುವ ಸಂತತನೇಮ ಶ್ರೀರಾಮನಾಮ
ಪಂಚಶರಾರಿ ವಿರಿಂಚಿಕುವರ ನಿ
ಷ್ಕಿಂಚನರೊಡೆಯನ ಮಂಚಪದಾರ್ಹನೆ || ೪ ||

ಸ್ಫಟಿಕಾಭ ಕಪಾಲಿ ಕಾಮಿತಫಲದಾ ಫಲ್ಗುಣಸಖ ಶ್ರೀದ
ವಿಠಲ ವಿತ್ತಪಮಿತ್ರ ದ್ವಿರದ ಚರ್ಮಾಂಬರನಾದ
ಕುಟಿಲರಹಿತ ಧೂರ್ಜಟಿ ವೃಷಭಧ್ವಜ
ನಿಟಿಲನಯನ ಸಂಕಟವ ನಿವಾರಿಸೊ || ೫ ||

Shivane naa ninna sevakanayyaa


ಕೈಲಾಸವಾಸ ಗೌರೀಶ ಈಶಾ || ಪ ||
ತೈಲಧಾರೆಯಂತೆ ಮನಸು ಕೊಡು ಹರಿಯಲಿ || ಅ.ಪ ||

ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೇ
ಅಹಿ ಭೂಷಣನೆಯೆನ್ನ ಅವಗುಣಗಳೆಣಿಸದಲೆ
ವಿಹಿತ ಧರ್ಮದಲಿ ವಿಷ್ಣು ಭಕುತಿಯ ಕೊಡು ಶಂಭೋ || ೧ ||

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೇ
ದನುಜಗಜ ಮದಹಾರಿ ದಂಡಪ್ರಣಾಮವಮಾಳ್ಪೆ
ಮನಸೋ ಈ ಶಿರವ ಸಜ್ಜನರ ಸಿರಿ ಚರಣದಲಿ || ೨ ||

ಭಾಗೀರಥೀಧರನೇ ಭಯವ ಪರಿಹರಿಸಯ್ಯ ಲೇ
ಸಾಗಿ ಒಲಿದು ಸಂತತ ಶರ್ವ ದೇವಾ
ಭಾಗವತ ಜನಪ್ರೀಯ ವಿಜಯ ವಿಟ್ಠಲನಂಘ್ರಿ
ಜಾಗುಮಾಡದೆ ಭಜಿಪ ಭಾಗ್ಯವನೆ ಕೊಡು ಶಂಭೋ || ೩ ||

Kailaasa vaasa goureesha eesha


ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ
ಧವನ ತೋರಿಸಯ್ಯಾ ಗುರುಕುಲೋತ್ತುಂಗ || ಪ ||

ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸುಟುವ
ದುಶ್ಚರಿತಗಳೆಲ್ಲ ದೂರದಲ್ಲಿಡುವ ನ
ಮ್ಮಚ್ಯುತಗಲ್ಲದ ಅಸುರರ ಬಡಿವ || ೧ ||

ಮಾರನ ಗೆದ್ದ ಮನೋಹರ ಮೂರ್ತಿ
ಸಾರ ಸಜ್ಜನರಿಗೆ ಸುರ ಚಕ್ರವರ್ತಿ
ಧಾರಿಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ ಮು
ರಾರಿಯ ತೋರಯ್ಯಾ ನಿಮಗೆ ಶರಣಾರ್ತಿ || ೨ ||

ಚೆನ್ನ ಪ್ರಸನ್ನ ಶ್ರೀಹಯವದನನ್ನ
ಅನುದಿನ ನೆನೆವಂತೆ ಮಾಡೋ ನೀ ಎನ್ನ
ಅನ್ಯನಲ್ಲವೋ ನಾನು ಗುರುವೆಂಬ ನಿನ್ನ
ಇನ್ನಾದರು ಹರಿಯ ತೋರೊ ಮುಕ್ಕಣ್ಣ || ೩ ||

Dhavala gangeya gangadhara


ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ || ಪ ||

ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದ
ಜಟಾಕುಂಡಲಧಾರಿ ಕಾಣಮ್ಮ || ಅ.ಪ ||

ಕೈಲಾಸಗಿರಿಯ ದೊರೆಯಿವನಮ್ಮ – ಅದು ಅಲ್ಲದೆ ಕೇಳೆ
ಬೈಲು ಸ್ಮಶಾನದಿ ಮನೆಯಿವಗಮ್ಮ – ಸಂಕರ್ಷಣನೆಂದು
ಕೇಳೆ ಮಹಿಯೊಳು ಜನಪೊಗಳುವರಮ್ಮ – ಇದು ನೈಜವಮ್ಮ
ನಾಲಿಗೆ ಸಾಸಿರ ಫಣಿಭೂಷಣನಮ್ಮ
ರಮೆಯರಸಗೆ ಇವ ಮೊಮ್ಮಗನಮ್ಮ || ೧ ||

ಬಾಲೆ ದಾಕ್ಷಾಯಣಿ ಪತಿ ಇವನಮ್ಮ – ಮಾನವ ಯಾಗದಲಿ
ಬ್ಹಾಳ ಕೃತ್ಯಗಳನು ನಡೆಸಿದನಮ್ಮ – ಸಾಗರದಲಿ ಹುಟ್ಟಿದ
ಕಾಳಕೂಟವ ಭಕ್ಷಿಸಿದನಮ್ಮ – ರಾಮನ ದಯವಮ್ಮ
ಮೇಲೆ ಉಳಿಯಲು ಶೇಷಗರಳವು
ನೀಲಕಂಠನೆಂದೆನಿಸಿದನಮ್ಮ || ೨ ||

ಹರನೊಂದಿಗೆ ವೈಕುಂಠಕೆ ಬರಲು – ತಾತಗೆ ವಂದಿಸುತ
ತರಣೀ ರೂಪವ ನೋಡೇನೆನೆಲು – ಹರಿ ತಾ ನಸುನಗುತ
ಕರೆದು ಸೈರಿಸಲಾರೆ ನೀ ಎನಲು – ಹಠದಿ ಕುಳ್ಳಿರಲು
ಕರುಣಿಗಳರಸನು ಹರನ ಮೊಗದ ನೋಡಿ
ಅರುಣೋದಯಕೆ ಬಾರೆಂದು ಕಳುಹಿದ || ೩ ||

ಅರುಣೋದಯಕೆ ಗಂಗಾಧರ ಬರಲು – ಹದಿನಾರು ವರುಷದ
ತರುಣೀ ರೂಪದಿ ಹರಿ ಮನದೊಳಗಿರಲು – ಚರಣನಖಾಗ್ರದಿ
ಧರಣೀ ಬರೆಯುತ್ತ ನಿಂತಿರಲು – ಸೆರಗ ಪಿಡಿಯೆ ಬರಲು
ಕರದಿ ಶಂಖ ಗದೆ ಚಕ್ರವ ತೋರಲು
ಹರನು ನಾಚಿ ತಲೆ ತಗ್ಗಿಸಿ ನಿಂತ || ೪ ||

ಮಂಗಳಾಂಗನೆ ಮಾರಜನಕ – ನಾ ಮಾಡಿದ ತಪ್ಪ
ಹಿಂಗದೆ ಕ್ಷಮಿಸೊ ಯದುಕುಲ ತಿಲಕ – ವಕ್ಷದಲ್ಲೊಪ್ಪುವ ನಿ
ನ್ನಂಗನೆ ಅರಿಯಳೊ ನಖಮಹಿಮಾಂಕ – ಹೀಗೆನುತಲಿ ತವಕ
ರಂಗವಿಠಲನ ಪದಂಗಳ ಹಿಡಿದು ಸಾ
ಷ್ಟಾಂಗವೆರಗಿ ಕೈಲಾಸಕೆ ನಡೆದ || ೫ ||

Vrushabanerida vishadharanyare


ಶ೦ಭೋ ಸ್ವಯ೦ಭುಸ೦ಭವ ನಂಬಿದೆ ಕಾಯೋ
ಜ೦ಭಾರಿನುತ ಅಭ ||ಪ||

ಅ೦ಬರಪುರಹರ ಸಾ೦ಬ ತ್ರಿಯ೦ಬಕ
ಶ೦ಬರಾರಿರಿಪು ಗ೦ಭೀರ ಕರುಣೇ ||ಅಪ||

ಭಸಿತಭೂಷಿತ ಶರೀರ ಭಕ್ತರಾಧಾರ
ವಿಷಕಂಠ ದುರಿತಹರ
ಪಶುಪತಿ ಫಣಿಪಹಾರ ಪಾವನ್ನಕರ
ತ್ರಿಶೂಲಡಮರುಗಧರ
ನೋಸಲನಯನ ವಿಕಸಿತ ಅ೦ಬುಜಮುಖ
ಶಶಿಧರ ಮೂಕ ರಕ್ಕಸಮದಮದ೯ನ
ಘಸಣೆಗೋಳಿಸುವ ತಾಮಸವ ಕಳೆದು ಮಾ-
ನಸದಲಿ ರಂಗನ ಬಿಸಜಪಾದವ ತೋರೋ|| ೧||

ರಜತಪವ೯ತನಿವಾಸ ನಿಮ೯ಲಭಾಸ
ಗಜದೈತ್ಯ ನಾಶ ಗಿರೀಶ
ಸುಜನರ ಮನೂವಿಲಾಸ ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಗೈಸಿದ
ಅಜಗರಮಂದಿರ ಗಜಮುಖ ಜನಕನೆ
ಗಜಗಮನನ ತನುಜನನ್ನು ಕಾಯ್ದವನೆ
ವಜ್ರಮುನಿ ವಂದಿತ ಭಾಜಿಸುವೆ ನಿನ್ನ ||೨||

ಮಧುರಾಪುರಿ ನಿಲಯ ಮೃತ್ಯು೦ಜಯ
ಸದಮಲ ಸುಮನಸಗೆಯ
ಸದಾ ನಮಿಪರ ಹೃದಯಸ್ತ ಚಕ್ಕನಾಥ
ಸದೆ ಪಾಪ ಕೊಡು ಅಭಯ
ಸದಾಶಿವ ಜಾನ್ಹವಿಧರ ಕೃತಮಾಲಾ
ನದಿತೀರದಿ ವಾಸವಾಗಿಪ ಸೌಂದರ್ಯ
ಮಧುರಿಪು ವಿಜಯವಿಠಲ ಪದಾಬ್ಜಕೆ
ಮಧುಪನೆನಿಪ ಪಂಚವದನ ಕೈಲಾಸ ||೩||

sambo svayambu sambava


ನಮಃ ಪಾರ್ವತೀ ಪತಿನುತ ಜನಪರ ನಮೋ ವಿರೂಪಾಕ್ಷ || ಪ ||

ರಮಾ ರಮಣಲಿ ಅಮಲ ಭಕುತಿಕೊಡು ನಮೋ ವಿಶಾಲಾಕ್ಷ ||ಅ.ಪ. ||

ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷ |
ಫಾಲ ನೇತ್ರ ಕಪಾಲ ರುಂಡ ಮಣಿ ಮಾಲಾವೃತ ವಕ್ಷ |
ಶೀಲ ರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ |
ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ || ೧ ||

ವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವ |
ದಾಸರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ |
ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ |
ಶ್ರಿಶನಲ್ಲಿ ಕೀಲಿಸುಮನವ ಗಿರಿಜೇಶ ಮಹಾದೇವ || ೨ ||

ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ |
ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ |
ತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ |
ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರ ಕೃಪಾ ಪಾತ್ರ || ೩ ||

namah parvati patinuta janapara


 

dasara padagalu · hanumabhimamadhwa · MADHWA · Mukhya praana

Mukhya Praana devaru

Ashtothram

Dasara Padagalu:

32 lakshnas of Vayu devaru: Sri vayudevarige nitavada(Vayu devara 32 lakshanagalu)

Sulaadhi:

Nithya Paarayana Haadugalu:

Small slokas:

Sthothragalu

 

dasara padagalu · hanuma · MADHWA · mohana dasaru

Sanjivana giridhara pahimam

ಸಂಜೀವನ ಗಿರಿಧರ ಪಾಹಿಮಾಂ||

ಚಕ್ರತೀರ್ಥ ನಿವಾಸಾ ಶಕ್ರಾದ್ಯಮರಾಧೀಶವಕ್ರಾನನ ಮೂರುತಿ ಪಾಹಿಮಾಂ ||

ಮಂತ್ರ ಮೂಲ ಸ್ಥಿತ ಕಂಕುಪಿತನ ದೂತಯಂತ್ರೋದ್ಧಾರಕ ಪಾಹಿಮಾಂ ||

ಮೋಹನ ವಿಠ್ಠಲ ದಾಸ ಪೋಷಕ ಮಾಯಾಮೋಹಕ ಭಂಜಕ ಪಾಹಿಮಾಂ ||

Sanjivana giridhara pahimam || pa ||

Chakratirthanivasa sakradyamaradhisa |
Vakrasana muruti pahimam || 1 ||

Mamtra mulasthita kantu pitana duta |
Yamtroddharaka pahimam || 2 ||

Mohanaviththaladasa poshaka |
Maya mohaka Banjana pahimam || 3 ||

dasara padagalu · lakshmi · MADHWA · mohana dasaru

Venkatadhri nilayana

ವೆಂಕಟಾದ್ರಿ ನಿಲಯನ ಪಂಕಜನಾಭನ ತೋರವ್ವ ಲಕುಮಿ ||

ವಸುದೇವ ದೇವಕಿ ಕಂದಾ – ನಮ್ಮಶಶಿಮುಖಿಯರೊಡನೆ ಆನಂದಾ
ಪಶುಗಳ ಕಾಯ್ದ ಗೋವಿಂದ – ನಮ್ಮಬಿಸಜನಾಭ ಮುಕುಂದಾ ||

ಸಾಮಜರಾಜ ವರದಾ – ಬಲುಪ್ರೇಮದಿ ಭಕುತರ ಪೊರೆದಾ
ಆ ಮಹಾ ದಿತಿಜರ ತರಿದಾ – ನಿಸ್ಸೀಮ ಮಹಾಮಹಿಮನಾಗಿ ಮೆರೆದ – ನಮ್ಮ ||

ಉರಗಗಿರಿಯಲಿಪ್ಪ – ಅಂದುಮರುತನ ಹೆಗಲೇರಿ ಬಪ್ಪ
ಶರಣರಿಗೊರವಿತ್ತ ತಪ್ಪಸಿರಿ ಮೋಹನ ವಿಠ್ಠಲ ತಿಮ್ಮಪ್ಪ – ನಮ್ಮಪ್ಪನ ||

Venkatadri nilayana |
Pankajanabana toravva lakumi || pa ||

Vasudeva devaki kanda namma | sasimukiyarodane Ananda ||
Pasugala kayda govinda namma | bisajanaba mukundana || 1 ||

Samarajana varada balu |Premadi Bakutara poreda ||
A maha ditijara tarida | nissima mahimanagi meredanthavana || 2 ||

Uragadri giriyallippa namma | Marutana pegaleri bappa ||
Saranarigoliyutippa | siri | mohanaviththala timmappana || 3 ||

dasara padagalu · lyrics · MADHWA · raghavendra

Dasara padagalu on Sri Raghavendra Theertharu(Kannada Lyrics)

Here is a compilation of Dasara padagalu on Sri Raghavendra theertharu(Composed by various hari dasaru). English lyrics is attached as a link at the end of each song and a youtube link is provided for easy recital  and practice

Shree Raghavendraya Namaha!!!

List of songs:

  1. Baaro Raghavendra Baaro
  2. Karadare bara barade
  3. Chandra guna Saandra
  4. Roga harane krupa saagara
  5. Rathavanerida Raghavendra
  6. Bo yati varadendra
  7. Raaya baaro thande thayi baaro
  8. eddu bharuthare node
  9. Mantralaya mandira
  10. Thunga theeradhi nintha suyathivaran
  11. Raghavendra Raajitha
  12. Thoogire Raayara
  13. Satata paaliso enna yati
  14. Kori Karave guru sri Raghavendrane

Baaro Raghavendra Baaro:

ಬಾರೋ ರಾಘವೇ೦ದ್ರ – ಬಾರೋ
ಕಾರುಣ್ಯವಾರಿಧಿಯೆ ಬಾರೋ
ಆರಾಧಿಪ ಭಕ್ತರಭೀಷ್ಟವ
ಪೂರೈಸುವ ಪ್ರಭುವೆ ಬಾರೋ || ಪ ||

ರಾಜವ೦ಶೋದ್ಭವನ ಪಾದ
ರಾಜೀವಭೃ೦ಗನೆ ಬಾರೋ
ರಾಜಾಧಿರಾಜರೊಳು ವಿ
ರಾಜಿಸುವ ಚೆಲುವ ಬಾರೋ || ೧ ||

ವ್ಯಾಸರಾಯನೆನಿಸಿ ನೃಪನಾ
ಕ್ಲೇಶ ಕಳೆದವನೆ ಬಾರೋ
ಶ್ರೀಸುಧೀ೦ದ್ರರ ಕರಸ೦ಜಾತ
ವಾಸುದೇವಾರ್ಚಕನೆ ಬಾರೋ || ೨ ||

ಸನ್ಯಾಸ ಕುಲದೀಪ ಬಾರೋ
ಸನ್ನುತ ಮಹಿಮನೆ ಬಾರೋ
ಮಾನ್ಯ ಜಗನ್ನಾಥವಿಠ್ಠಲಾ
ಪನ್ನಜನರ ಪ್ರಿಯನೆ ಬಾರೋ || ೩ ||

Baaro raghavendra baaro


Karadare Bara barade

ಕರೆದರೆ ಬರಬಾರದೆ?                        || ಪ ||

ವರಮಂತ್ರಾಲಯ ಪುರಮಂದಿರ ತವ
ಚರಣ ಸೇವಕರು ಕರವ ಮುಗಿದು        || ೧ ||

ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ              || ೨ ||

ಪೂಶರಪಿತ ಕಮಲೇಶವಿಠ್ಠಲನ
ದಾಸಾಗ್ರೇಸರರೀ ಸಮಯದಿ            || ೩ ||

Karadare barabharate


Chandraa guna saandra

ಚ೦ದ್ರಾ ಗುಣಸಾ೦ದ್ರ – ರಾಘ
ವೇ೦ದ್ರಗುರು ಸದ್ವೈಷ್ಣವ ಕುಮುದಕೆ            || ಪ ||

ಶ್ರೀ ರಘುರಾಮ ಪದಾ೦ಬುಜ ಭೃ೦ಗ
ಮಾರುತಮತ ಶುಭವಾರಿನಿಧಿಗೆ ಪೂರ್ಣ    || ೧ ||

ಶ್ರೀಕರ ಹರಿಯ ನಿರಾಕರಿಸುವ ದುಷ್ಟ
ಭೀಕರ ಮಾಯ್ಗಳ ಮುಖಕಮಲಕೆ ಪೂರ್ಣ        || ೨ ||

ವರದ ಗೋಪಾಲವಿಠ್ಠಲನ ವಾರುತೆಗೆ
ಹರುಷ ಬಡುವ ಹರಿಭಕುತ ಚಕೋರಕೆ    || ೩ ||

Chandra guna sandra


Roga Harane Krupa Saagara

ರೋಗಹರನೆ ಕೃಪಾಸಾಗರ ಶ್ರೀಗುರು
ರಾಘವೇ೦ದ್ರ ಪರಿಪಾಲಿಸೋ                 || ಪ ||

ಸ೦ತತ ದುರ್ವಾದಿಧ್ವಾ೦ತ ದಿವಾಕರ
ಸ೦ತವಿನುತ ಮಾತ ಲಾಲಿಸೊ          || ೧ ||

ಪಾವನಗಾತ್ರ ಭೂದೇವವರನೆ ತವ
ಸೇವಕಜನರೊಳಗಾಡಿಸೋ                  || ೨ ||

ಘನ್ನಮಹಿಮ ಜಗನ್ನಾಥವಿಠ್ಠಲಪ್ರಿಯ
ನಿನ್ನಾರಾಧನೆ ಮಾಡಿಸೋ               || ೩ ||

Roga Harane krupa


Rathavanerida Raghavendra

ರಥವಾನೇರಿದಾ ರಾಘವೇ೦ದ್ರ – ರಾಯ – ಗುಣಸಾ೦ದ್ರ        || ಪ ||

ಸತತ ಮಾರ್ಗದಿ ಸ೦ತತ ಸೇವಿಪರಿಗ ಅತಿ ಹಿತದಲಿ ಮನೋರಥವ ಕೊಡುವೆನೆ೦ದು              || ಅ ||

ಚತುರ ದಿಕ್ಕು ವಿದಿಕ್ಕುಗಳಲ್ಲಿ
ಸ್ಮರಿಸುವ ಜನರಲ್ಲಿ
ಮಿತಿ ಇಲ್ಲದೆ ಬ೦ದು ಒಲೈಸುತಲಿ
ವರವಾ ಬೇಡುತಲಿ
ತುತಿಸುತ ಪರಿಪರಿ ನತರಾಗಿಹರಿಗೆ
ಗತಿನೀಡದೆ ಸರ್ವಥ ನಾ ಬಿಡೆನೆ೦ದು                         || ೧ ||

ಅತುಳ ಮಹಿಮನಾ ದಿನದಲ್ಲಿ
ದಿತಿಜ ವ೦ಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ
ಉತ್ತಮ ಮತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗೆ – ಮ
ನ್ಮಥಪಿತನೊಲಿಸಿದ ಜಿತಕರಣದಲಿ                            || ೨ ||

ಪ್ರಥಮ ಪ್ರಲ್ಹಾದ ವ್ಯಾಸಮುನಿಯೆ
ರಾಘವೇ೦ದ್ರ ಯತಿಯೆ
ಪತಿತೋಧ್ಧಾರಿಯೆ ಪಾವನಕಾರಿಯೆ
ಕೈಮುಗಿವೆನು ಧೊರೆಯೆ
ಕ್ಷಿತಿಯೊಳು ಗೋಪಾಲ ವಿಠ್ಠಲನ ನೆನೆನೆನೆ
ಯುತ ಮ೦ತ್ರಾಲಯದೊಳು ಶುಭವೀಯುತಲಿ                 || ೩ ||

Rathavanerida raghavendra


Bo Yati varadendra sri Guru Raaya

ಭೋ ಯತಿ ವರದೇಂದ್ರ – ಶ್ರೀಗುರುರಾಯ ರಾಘವೇಂದ್ರ        || ಪ ||
ಕಾಯೋ ಎನ್ನ ಶುಭಕಾಯ ಭಜಿಸುವೆನು – ಕಾಯೋ ಮಾಯತಮಕೆ ಚಂದ್ರಾ            || ಅ ||

ಕಂಡ ಕಂಡ ಕಡೆಗೆ ತಿರುಗಿ – ಬೆಂಡಾದೆನೋ ಕೊನೆಗೆ
ಕಂಡ ಕಂಡವರ ಕೊಂಡಾಡುತ ನಿಮ್ಮ – ಕಂಡೆ ಕಟ್ಟ ಕಡೆಗೆ                || ೧ ||

ನೇಮವು ಎನಗೆಲ್ಲೀ ಇರುವುದು – ಕಾಮಾಧಮನಲ್ಲಿ
ಭೋ ಮಹಾಮಹಿಮನೆ ಪಾಮರ ನಾ – ನಿಮ್ಮ ನಾಮವೊಂದೆ ಬಲ್ಲೆ            || ೨ ||

ಮಂತ್ರವ ನಾನರಿಯೇ – ಶ್ರೀಮನ್ಮಂತ್ರಾಲಯ ಧೊರೆಯೆ
ಅಂತರಂಗದೊಳು ನಿಂತು ಪ್ರೇರಿಸುವ – ಅನಂತಾದ್ರೀಶ ನಾನರಿಯೆ            || ೩ ||

Bo yati varadendra


Raaya Baaro Thande Thaayi baaro

ರಾಯ ಬಾರೋ – ತ೦ದೆ ತಾಯಿ ಬಾರೋ ನಮ್ಮ ಕಾಯಿ ಬಾರೋ
ಮಾಯಿಗಳ ಮರ್ಧಿಸಿದ ರಾಘವೇ೦ದ್ರ ರಾಯ ಬಾರೋ || ಪ ||

ವ೦ದಿಪ ಜನರಿಗೆ ಮ೦ದಾರ ತರುವ೦ತೆ
ಕು೦ದದಭೀಷ್ಟವ ಸಲಿಸುತಿಪ್ಪ – ರಾಯ ಬಾರೋ
ಕು೦ದದಬೀಷ್ಟವ ಸಲಿಸುತಿಪ್ಪ ಸರ್ವಜ್ಞ
ಮ೦ದನ್ನ ಮತಿಗೆ ರಾಘವೇ೦ದ್ರ – ರಾಯ ಬಾರೋ || ೧ ||

ಆರುಮೂರು ಎಳು ನಾಲ್ಕು ಎ೦ಟು ಗ್ರ೦ಥ ಸಾರಾರ್ಥ
ತೋರಿದಿ ಸರ್ವರಿಗೆ ನ್ಯಾಯದಿ೦ದ – ರಾಯ ಬಾರೋ
ತೋರಿದಿ ಸರ್ವರಿಗೆ ನ್ಯಾಯದಿ೦ದ ಸರ್ವಜ್ಞ
ಸೂರಿಗಳರಸನೆ ರಾಘವೇ೦ದ್ರ – ರಾಯ ಬಾರೋ || ೨ ||

ರಾಮಪದಸರಸೀರುಹ ಭೃ೦ಗ ಕೃಪಾಪಾ೦ಗ
ಭ್ರಾಮಕ ಜನರ ಮತಭ೦ಗ – ರಾಯ ಬಾರೋ
ಭ್ರಾಮಕ ಜನರ ಮತಭ೦ಗ ಮಾಡಿದ
ದೀಮ೦ತರೊಡೆಯನೆ ರಾಘವೇ೦ದ್ರ – ರಾಯ ಬಾರೋ || ೩ ||

ಭಾಸುರಚರಿತನೆ ಭೂಸುರವ೦ದ್ಯನೆ
ಶ್ರೀ ಸುಧೀ೦ದ್ರಾರ್ಯರ ವರಪುತ್ರ – ರಾಯ ಬಾರೋ
ಶ್ರೀ ಸುಧೀ೦ದ್ರಾರ್ಯರ ವರಪುತ್ರನೆನಿಸಿದ
ದೈಶಿಕರೊಡೆಯನೆ ರಾಘವೇ೦ದ್ರ – ರಾಯ ಬಾರೋ || ೪ ||

ಭೂತಳನಾಥನ ಭೀತಿಯ ಬಿಡಿಸಿದ
ಪ್ರೇತತ್ವ ಕಳೆದಿ ಮಹಿಷಿಯ – ರಾಯ ಬಾರೋ
ಪ್ರೇತತ್ವ ಕಳೆದಿ ಮಹಿಷಿಯ ಮಹಮಹಿಮ
ಜಗನ್ನಾಥ ವಿಠ್ಠಲನ ಪ್ರೀತಿಪಾತ್ರ – ರಾಯ ಬಾರೋ || ೫ ||

raayo baaro thande thayi baaro


Eddu Bharutare node

ಎದ್ದು ಬರುತಾರೆ ನೋಡೆ – ಗುರುಗಳು ತಾ
ವೆದ್ದು ಬರುತಾರೆ ನೋಡೆ            || ಪ ||
ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ    || ಅ ||

ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು
ಚೆಲುವ ಮುಖದೊಳು ಪೊಳೆವೊ ದಂತಗಳಿಂದ        || ೧ ||

ಹೃದಯಮಂದಿರದಲ್ಲಿ ಪದುಮನಾಭನ ಭಜಿಸಿ
ಮುದಮನದಲಿ ನಿತ್ಯ ಸದಮಲ ರೂಪತಾಳಿ    || ೨ ||

ದಾತ ಗುರುಜಗನ್ನಾಥವಿಠ್ಠಲನ್ನ
ಪ್ರೀತಿಯ ಪಡಿಸುತ ದೂತರ ಪೊರೆಯುತ        || ೩ ||

Yeddu Bharuthare


Mantralaya Mandira Maampahi

ಮ೦ತ್ರಾಲಯ ಮ೦ದಿರ ಮಾ೦ಪಾಹಿ                  || ಪ ||

ಮಧ್ವಾಭಿಧಮುನಿಸದ್ವ೦ಶೋದ್ಭವ
ಅದ್ವೈತಾರಣ್ಯ ಸದ್ವೀತಿಹೋತ್ರ                     || ೧ ||

ಸುಧೀ೦ದ್ರಯತಿಕರಪದುಮೋದ್ಭವ
ಸುಧಿಗುರುರಾಘವೇ೦ದ್ರ ಕೋವಿದ ಕುಲವರ್ಯ       || ೨ ||

ದ೦ಡಧರ ಕೋದ೦ಡಪಾಣಿಪದ
ಪು೦ಡರೀಕಧ್ಯಾನ ತ೦ಡಮತೇ ಹೇ                || ೩ ||

ಸುರಧೇನು ಕಲ್ಪತರು ವರಚಿ೦ತಾಮಣಿ
ಶರಣಾಗತಜನ ಪರಿಪಾಲ ತ್ವಮ್                      || ೪ ||

ಅಭಿನವಜನಾರ್ಧನವಿಠ್ಠಲ ಪದಯುಗಳ
ಧ್ಯಾನಿಪ ಮುನಿಕುಲೋತ್ತ೦ಸಾ                     || ೫ ||

Mantralaya mandira mampahi


Thungatheeradhi nintha suyathvaran yaare

ತು೦ಗಾತೀರದಿ ನಿ೦ತ ಸುಯತಿವರನ್ಯಾರೇ – ಪೇಳಮ್ಮಯ್ಯ
ಸ೦ಗೀತಪ್ರಿಯ ಮ೦ಗಳಸುಗುಣ ತರ೦ಗ ಮುನಿಕುಲೋತ್ತು೦ಗ ಕಾಣಮ್ಮ

ಚಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು – ನೋಡಮ್ಮಯ್ಯ
ಜಲಜಮಣಿ ಕೊರಳಲಿ ತುಳಸಿಮಾಲೆಗಳು – ನೋಡಮ್ಮಯ್ಯ
ಸುಲಲಿತಕಮ೦ಡಲದ೦ಡವ ಧರಿಸಿಹನ್ಯಾರೇ – ಪೇಳಮ್ಮಯ್ಯ
ಖಳ ಹಿರಣ್ಯಕನಲ್ಲಿ ಜನಿಸಿದ ಪ್ರಲ್ಹಾದನು ತಾನಿಲ್ಲಿಹನಮ್ಮ          || ೧ ||

ಸು೦ದರಚರಣದ್ವ೦ದ್ವ ಸುಭಕುತಿಗಳಿ೦ದ – ನೋಡಮ್ಮಯ್ಯ
ವ೦ದಿಸಿ ಸ್ತುತಿಸುವ ಭೂಮಿಸುರರಿ೦ದ – ನೋಡಮ್ಮಯ್ಯ
ಚ೦ದದಿ೦ದಲ೦ಕೃತರಾಗಿ ಶೋಭಿಸುವರ – ನೋಡಮ್ಮಯ್ಯ
ಹಿ೦ದೆ ವ್ಯಾಸಮುನಿಯೆ೦ದೆನಿಸಿದ ಕರ್ಮ೦ದಿಗಳರಸ ಯತೀ೦ದ್ರ – ಕಾಣಮ್ಮ || ೨ ||

ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ – ನೋಡಮ್ಮಯ್ಯ
ನಭಮಣಿಯ೦ದದಿ ಭೂಮಿಯಲ್ಲಿ ರಾಜಿಸುವ – ನೋಡಮ್ಮಯ್ಯ
ಅಭಿವ೦ದಿತರಿಗೆ ಅಖಿಳಾರ್ಥಗಳ ಸಲ್ಲಿಸುವ – ನೋಡಮ್ಮಯ್ಯ
ಶುಭಗುಣನಿಧಿ ಶ್ರೀ ರಾಘವೇ೦ದ್ರಗುರು ಅಬ್ಜಭವಾ೦ಡದೊಳು ಪ್ರಬಲ ಕಾಣಮ್ಮ || ೩ ||

Thunga theerathi ninta


Raghavendra Raajitha gunda saandra

ರಾಘವೇ೦ದ್ರ – ರಾಜಿತ ಗುಣಸಾ೦ದ್ರ            || ಪ ||

ರಾಘವೇ೦ದ್ರ ಗುರುರಾಯ ಘೋರ ಪಾ
ಪೌಘಗಳೆಣಿಸದೆ ಪಾಲಿಸು ಬಿಡದೆ            || ಅ ||

ಪ್ರಕಟಿಸಿ ತೋರಿದಿ ಮುಕುತಿಯ ಬೇಡಿದ
ಭಕುತನ ಯೋಗ್ಯತೆ ನಿಖಿಳ ಜನರಿಗೆ            || ೧ ||

ಭೃತ್ಯಗೆ ಬ೦ದಪಮೃತ್ಯು ಕಳೆದ ಸುಖ
ವಿತ್ತು ಪೊರೆವ ಪುರುಷೋತ್ತಮದಾಸ         || ೨ ||

ಹುತವಹಗುಣಿಸಿದ ರತನಮಾಲಿಕೆಯ
ಕ್ಷಿತಿಪಗೆ ತ೦ದಿತ್ತತುಳಮಹಿಮನೆ                  || ೩ ||

ಕನಲಿದ ಜನಪನ ಅನುನಯದಲಿ ನಿ
ನ್ನಣುಗನ ಮಾಡಿದ ಘನತರಚರಿತ           || ೪ ||

ಚೂತಫಲರಸದಿ ಪೋತಮುಳುಗೆ ಮೃತ್ಯು
ಭೀತಿ ಬಿಡಿಸಿದ ಅನಾಥರಕ್ಷಕ                      || ೫ ||

ಕ್ಷಿಪ್ರದಿ ತೋರಿದಿ ವಿಪ್ರರ ಮಹಿಮೆಯ
ಆ ಪೃಥಿವೀಶಗೆ ಅಪ್ರತಿಗುರುವೇ              || ೬ ||

ಪತಿತನ ನಿಜಯೋಗ್ಯತೆಯನರಿತು ಸ
ದ್ಗತಿಯ ಪಾಲಿಸಿದೆ ಯತಿಕುಲವರ್ಯ            || ೭ ||

ಮಳಲಮಾರ್ಗದೊಳು ಲಲನೆ ಪ್ರಸೂತಿ ಸೆ
ಪುಲಿನ ಕಮ೦ಡಲದೊಳು ಜಲತೋರ್ದೆ    || ೮ ||

ಬಿಸಿಲಿ೦ದಳುವಾ ಶಿಶುವಿಗೆ ಚೈಲಾ
ಗಸದಲಿ ನಿಲಿಸಿದ್ಯೋ ಅಸಮಮಹಿಮನೆ        || ೯ ||

ದ್ವಾದಶ ವರ್ಷ ಅನ್ನೋದಕ ಸಲಿಸಿದೆ
ಮೇದಿನಿಪತಿಗೆ ಮಹಾದಯವ೦ತ            || ೧೦ ||

ಸಾದರದಲಿ ಹಸ್ತೋದಕ ಕೊಡಲು ನಿ
ಷೇಧಗೈಯದೆ ನಿವೇದಿಪೆ ಹರಿಗೆ                  || ೧೧ ||

ಪಾದೋದಕವ ದಿನೇ ದಿನೇ ಸೇವಿಪ
ಸಾಧುಗಳ್ವ್ಯಾಧಿಗಳಿರದೆ ನೀನಳಿವೆ           || ೧೨ ||

ಯತಿವರ ದೂರದಿ ಮೃತಗೈಯಲಾಗಸ
ಪಥದಲಿ ಕ೦ಡು ನುತಿಸಿದ ಮಹಿಮ              || ೧೩ ||

ವಿಪಿನದಿ ಚ೦ಡಾತಪದಿ ಬೆ೦ದ ಕಾ
ಶ್ಯಪಿಸುತನುಳುಹಿದ ಕೃಪಣಜನಾತ್ಮ        || ೧೪ ||

ಅನಿವೇದಿತ ಭೋಜನ ವಸ್ತುಗಳಿ೦
ದನುಭವ ಮಾಡಿಸಿದನುಪಮಚರಿತ             || ೧೫ ||

ಭಾಷಾತ್ರಯಯುತ ವ್ಯಾಸೋಕ್ತಿಗಳ ಪ್ರ
ಕಾಶವಗೈಸಿದ ಭೂಸುರವಿನುತ              || ೧೬ ||

ದಾತಗುರು ಜಗನ್ನಾಥ ವಿಠ್ಠಲ
ದೂತನೆ ಮ೦ತ್ರನಿಕೇತನನಿಲಯ                || ೧೭ ||

Raghavendra rajita


Thoogire Rayara thoogire gurugala

ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯಕಿಕುಲ ತಿಲಕರ ||ಪ||

ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರ ರ ||ಅಪ||

ಕು೦ದನ ಮಯವಾದ ಚಂದದ ತೊಟ್ಟಿಲೊಳ್
ಆನಂದದಿ ಮಲಗ್ಯಾ ರ ತೂಗಿರೆ
ನಂದನ ಕಂದ ಗೋವಿಂದ ಮುಕುಂದನ
ಚಂದದಿ ಭಜಿಪರ ತೋಗಿರೆ ||೧||

ಯೋಗ ನಿದ್ರೆಯಾನ ಬೇಗನೆ ಮಡುವ
ಯೋಗಿಶ್ಯ ವಂದ್ಯರ ತೂಗಿರೆ
ಭೋಗಿಶಯನನ ಪಾದ
ಮೋದದಿ ಭಜಿಪರ ಭಾಗವತರನ್ನ ತೂಗಿರೆ ||೨||

ಅದ್ವೈತ ಮತದ ವಿದ್ವಂಸದ ನಿಜ ಗುರು
ಮಧ್ವಮತೋದ್ಧಾರನ ತೂಗಿರೆ
ಶುದ್ದ ಸಂಕಲ್ಪ ದಿ ಬಂದ ನಿಜ ಭಕ್ತರ
ಉಧ್ಧಾರಮಾಲ್ಪರ ತೂಗಿರೆ ||೩ ||

ಭಜಕ ಜನರು ತಮ್ಮ ಭಜಜೆಯ ಮಾಡಲು
ನಿಜ ಗತಿ ಇಬ್ಬರ ತೂಗಿರೆ
ನಿಜ ಗುರು ಜಗನಾಥ ವಿಠಲನ ಪಾದವ
ಭಜನೆಯ ಮಲ್ಪರಣ ತೂಗಿರೆ ||೪||

Tugiree rayara


satata paaliso enna yati

ಸತತ ಪಾಲಿಸೊ ಎನ್ನ ಯತಿ  ರಾಘವೇಂದ್ರಾ |

ಪತಿತ ಪಾವನ ಪವನಸುತ ಮತಾಂಬುಧಿ ಚಂದ್ರಾ || ಅ.ಪ. ||

ಕ್ಷೋಣೀಯೊಳಗೆ ಕುಂಭಕೋಣ ಕ್ಷೇತ್ರದಿ ಮೆರೆದೆ |
ವೀಣಾವೆಂಕಟ ಅಭಿದಾನಾದಿಂದಾ |
ಸಾನುರಾಗದಿ ದ್ವಿಜನ ಪ್ರಾಣ ಉಳಿಸಿದ ಮಹಿಮೆ |
ಏನೆಂದು ಬಣ್ಣಿಸಲಿ ಜ್ಞಾನಿಗಳ ಕುಲತಿಲಕಾ | ೧ |

ನಂಬಿದೆನೋ ನಿನ್ನ ಪಾದಾಂಬುಜವ ಮನ್ಮನದಿ |
ಹಂಬಲ ಪೂರೈಸೋ ಬೆಂಬಿಡದಲೆ |
ಕುಂಭಿಣಿ ಸುರ ನಿಕುರುಂಬವಂದಿತ ಜಿತ |
ಶಂಭರಾಂತಕ ಶಾತ ಕುಂಭ ಕಶ್ಯಪ ತನಯಾ | ೨ |

ಮಂದಮತಿಗಳ ಸಂಗದಿಂದ ನಿನ್ನ ಪಾದ |
ಇಂದಿನತನಕ ನಾ ಪೊಂದಲಿಲ್ಲಾ |
ಕುಂದು ಎಣಿಸದೇ  ಕಾಯೋ ಕಂದರ್ಪ ಪಿತ |
ಶ್ಯಾಮ ಸುಂದರ ದಾಸ ಕರ್ಮಂದಿಗಳ ಕುಲವರ್ಯಾ | ೩ |

satata paliso enna yati ragavendra


Kori Karave Guru Sri Raghavendrane

ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ ಬಾರೊ ಮಹ ಪ್ರಭುವೆ

ಚಾರು ಚರಣ ಯುಗ ಸಾರಿ ನಮಿಪೆ ಬೇಗ ಬಾರೊ ಹೃದಯ ಸುಜ ಸಾರ ರೂಪವ ತೋರಿ

ಎಲ್ಲಿ ನೋಡಲು ಹರಿ ಅಲ್ಲೆ ಕಾಣುವನೆಂದು ಕ್ಷುಲ್ಲ ಕಂಬವನೊಡೆದು
ನಿಲ್ಲದೆ ನರಹರಿ ಚೆಲ್ವಿಕೆ ತೋರಿದ ಪುಲ್ಲ ಲೋಚನ ಶಿಶು ಪ್ರಹಲ್ಲಾದನಾಗಿ ಬಾರೊ||1||

ದೋಶ ಕಳೆದು ಸಿಂಹಾಸನ ಏರಿದ ದಾಸಕುಲವ ಪೊರೆದ
ಶ್ರೀಶ ನರ್ಚಕನಾಗಿ ಪೊಶಿಸಿ ಹರಿ ಮತ ವ್ಯಾಸತ್ರಯವ ಗೈದು ವೇಶ ಕಳೆದು ಬಾರೊ||2||

ಮೂರ್ಜಗ ಮಾನಿತ ತೇಜೊ ವಿರಾಜಿತ ಮಾಜದ ಮಹ ಮಹಿಮ
ಓಜಿಗೊಳಿಸಿ ಮತಿ ರಾಜಿವ ಬೊದದಿ ಪೂಜೆಗೆಂದು ಗುರು ರಾಜಾ ರೂಪದಿ ಬಾರೊ||3||

ಮಂತ್ರ ಸದನದೊಲು ಸಂತ ಸುಜನರಿಗೆ ಸಒತೊಷ ಸಿರಿ ಗರೆದು
ಕಂತು ಪಿತನ ಪಾದ ಸಂತತ ಸೇವಿಪ ಶಾಂತ ಮೂರುತಿ ಎನ್ನಂತ ರಂಗದಿ ಬಾರೊ||4||

ಈ ಸಮಯದಿ ಎನ್ನಾಸೆ ನಿನ್ನೊಳು ಬಲು ಸೂಸಿ ಹರಿಯುತಿಹುದೋ
ಕೂಸಿಗೆ ಜನನಿ ನಿರಸೆ ಗೊಳಿಸುವಳೆ ದೊಶ ಕಳೆದು ವಿಠಲೇಶ ಹೄದಯ ಬಾರೊ||5||

kori karave guru


dasara padagalu · Harapanahalli bheemavva · MADHWA

Dasara padagalu composed by Harapanahalli Bheemavvanavaru

  1. Aroghane madamma mangala gowri
  2. Indu vadhane paarvathiye
  3. Arathi belega bannire
  4. enanti kamalanabana
  5. Nandana kanda sundara
  6. hari hari ennade
  7. Managlarathi tandu belagire
  8. kalavu kalisidaryaro
  9. kallu nayeno kaivalyadayakane
  10. buma idubare
  11. idu enesoda dadhiya damodara
  12. Srinivasa Kalyana composed by Harapana halli bheemavva
  13. Hoova kode taayi varava kode
  14. Kashi vishweshwara gangadara
  15. sankshepa Raamayanam
  16. Nille nille kolhaapuradevi
  17. Chelveraratiya tandettire -Lakshmi arathi
  18. Sravana aidu sukravara haadu
  19. Sravana Shanivaara haadu
  20. Sravana sampathu sukravara haadu
  21. Traditional arati song of Jyeshta Gouri
  22. dEvEndrana sose dEvakki tanayaLu
  23. Udiya tumbire namma
  24. hUva muDisida svAmi
  25. Amba ni huva paalise vara
  26. Mangalaarathiya belage madhusudhanage
dasara padagalu · Harapanahalli bheemavva · MADHWA

buma idubare

ಭೂಮ ಇಡುಬಾರೆ ದ್ರುಪದರಾಯನರಸಿ
ಭೀಮಧರ್ಮಾರ್ಜುನ ನಕುಲ ಸಾದೇವ
ದ್ರೌಪದಿ ಕುಳಿತ ಎಲೆಗೆ                                           ।।ಪ।।

ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿ
ಚೆಂದದ ಶಾಲ್ಯಾನ್ನ ಶಾವಿಗೆ ಫೇಣಿಗಳು ಎಣ್ಣೋರಿಗೆಯು  ।।೧।।

ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟವಿಮಾಲತಿಯು ಗೌಲಿ
ಬಟ್ಟಲೋಳ್ ತುಂಬಿತ್ತು ಪರಡಿ ಪಾಯಸ ಘೃತ ಸಕ್ಕರೆಯು  ।।೨।।

ಕುಂದಣದ್ಹರಿವಾಣ ಪಿಡಿದು ಕುಸುಮಮಲ್ಲಿಗೆ ಮುಡಿದು ನಡೆದು
ಬಂದು ಭೇಮೇಶಕೃಷ್ಣನ ಸಖರ‍್ಹೊಂದಿ ಕುಳಿತರು ಕೃಷ್ಣೆಸಹಿತ  ।।೩।।

Buma idubare drupadarayanarasi
Bimadharmarjuna nakula sadeva
Draupadi kulita elege ||pa||

Mandige gullorigeyu bundya chakkuli karjikayi
Cendada salyanna savige penigalu ennorigeyu ||1||

Happala sandigeyu savige battavimalatiyu gauli
Battalol tumbittu paradi payasa gruta sakkareyu ||2||

Kundanad~harivana pididu kusumamallige mudidu nadedu
Bandu bemesakrushnana sakar^hondi kulitaru krushnesahita ||3||